ಪರಭಾಷೆ ಸಿನಿಮಾಗಳ ಅಬ್ಬರದ ನಡುವೆ ಕನ್ನಡದ ‘ಜೇಮ್ಸ್’ (James Movie) ಸಿನಿಮಾಗೆ ಒಂದಷ್ಟು ಅಡೆತಡೆಗಳು ಆಗಿವೆ. ಬಹುತೇಕ ಕಡೆಗಳಲ್ಲಿ ಪ್ರದರ್ಶನಗಳ ಸಂಖ್ಯೆ ಕಡಿಮೆ ಮಾಡಲಾಗಿದೆ. ಈಗಾಗಲೇ ಯಶಸ್ವಿಯಾಗಿ ಪ್ರದರ್ಶನ ಮಾಡುತ್ತಿರುವ ‘ದಿ ಕಾಶ್ಮೀರ್ ಫೈಲ್ಸ್'(The Kashmir Files) ಹಾಗೂ ಮಾ.25ರಂದು ತೆರೆ ಕಾಣಲಿರುವ ‘ಆರ್ಆರ್ಆರ್'(RRR) ಸಿನಿಮಾಗಳಿಂದಾಗಿ ಪುನೀತ್ ರಾಜ್ಕುಮಾರ್ (Puneeth Rajkumar) ನಟನೆಯ ‘ಜೇಮ್ಸ್’ ಸಿನಿಮಾ ತೊಂದರೆಗೆ ಸಿಲುಕುತ್ತಿದೆ ಎಂಬ ಮಾತು ಅಭಿಮಾನಿಗಳ ವಲಯದಲ್ಲಿ ಕೇಳಿಬಂದಿತ್ತು.
ಆದರೆ, ಈ ವಿಚಾರಕ್ಕೆ ಇದೀಗ ಕ್ಲಾರಿಟಿ ಸಿಕ್ಕಿದೆ. ಪುನೀತ್ ರಾಜ್ ಕುಮಾರ್(Puneeth Rajkumar) ಅಭಿನಯದ ಜೇಮ್ಸ್ ಚಿತ್ರದ ಥಿಯೇಟರ್ ವಿವಾದ ಇದೀಗ ಸುಖಾಂತ್ಯ ಕಂಡಿದೆ. ಶಿವರಾಜ್ ಕುಮಾರ್(Shivarajkumar), ಸಿಎಂ ಬೊಮ್ಮಾಯಿ(CM Bommai) ಎಂಟ್ರಿಯಿಂದ ಥಿಯೇಟರ್ ಸಮಸ್ಯೆ ಸುಖಾಂತ್ಯ ಕಂಡಿದೆ. ಶಿವಣ್ಣ ಅವರ ಮಾತು ಕೇಳಿದ ಬಳಿಕ ಅಪ್ಪು ಅಭಿಮಾನಿಗಳು ನಿರಾಳರಾಗಿದ್ದಾರೆ.
ಜೇಮ್ಸ್ಗೆ ಯಾವುದೇ ತೊಂದರೆಯಾಗಲ್ಲ ಎಂದ ಶಿವಣ್ಣ!
ಜೇಮ್ಸ್ ಥಿಯೇಟರ್ ವಿವಾದ ನಿನ್ನೆಯಿಂದ ತುಸು ಹೆಚ್ಚು ಸುದ್ದಿಯಾಗಿತ್ತು. ನಿನ್ನೆ ರಾತ್ರಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕೂಡ ಪುನೀತ್ ಸಿನಿಮಾಗೆ ಯಾವುದೇ ತೊಂದರೆ ಆಗಲ್ಲ ಅಂತ ಭರವಸೆ ನೀಡಿದ್ದರು. ಇಂದು ಹಲವು ಕನ್ನಡ ಪರ ಸಂಘಟನೆಗಳು ತ್ರೀವೆಣಿ ಚಿತ್ರಮಂದಿರದ ಮುಂದೆ ಪ್ರತಿಭಟನೆ ನಡೆಸಿದರು. ಜೇಮ್ಸ್ ಸಿನಿಮಾಗೆ ಯಾವುದೇ ತೊಂದರೆ ನೀಡದಂತೆ ಎಚ್ಚರಿಸಿದ್ದರು. ಈ ಬೆಳವಣಿಗೆ ಆಗುತ್ತಿದ್ದಂತೆ ಫಿಲ್ಮ್ ಚೇಂಬರ್ಗೆ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಎಂಟ್ರಿಯಾಗಿದ್ದರು.
ಶಿವಣ್ಣ ಎಂಟ್ರಿ ಬಳಿಕ ಎಲ್ಲವೂ ಕೂಲ್ ಕೂಲ್!
ಜೇಮ್ಸ್ ಥಿಯೇಟರ್ ವಿವಾದ ಕಾವು ಏರುತ್ತಿದ್ದಂತೆ ಶಿವಣ್ಣ ಎಂಟ್ರಿಯಾಗಿದ್ದರು. ಸುಮಾರು 45 ನಿಮಿಷಕ್ಕೂ ಹೆಚ್ಚು ಕಾಲ ಫಿಲ್ಮ್ ಚೇಂಬರ್ನಲ್ಲಿ ಚರ್ಚೆ ನಡೆಸಿದ್ದಾರೆ. ಇದೇ ವೇಳೆ ಜೇಮ್ಸ್ ಸಿನಿಮಾದ ನಿರ್ಮಾಪಕ ಕಿಶೋರ್ ಕೂಡ ಹಾಜರಿದ್ದರು. ಶಿವಣ್ಣ ಎಂಟ್ರಿಯಾಗಿ ಮಾತುಕತೆ ನಡೆಸಿದ ಬಳಿಕ ಈ ವಿವಾದ ಸುಖಾಂತ್ಯವಾಗಿದೆ. ಜೇಮ್ಸ್ ಚಿತ್ರವನ್ನು ಉಳಿಸಿಕೊಂಡು RRRಗೂ ಫಿಲ್ಮ್ ಚೇಂಬರ್ ಅನುವು ಮಾಡಿಕೊಟ್ಟಿದೆ. ಜೇಮ್ಸ್ ರಿಲೀಸ್ ಆಗಿದ್ದ, ಅನುಪಮ, ಪ್ರಸನ್ನ, ಅಂಜನ್ ಚಿತ್ರಮಂದಿರಗಳಲ್ಲಿ RRR ರಿಲೀಸ್ ಆಗಲಿದೆ.
ದಿ ಕಾಶ್ಮೀರ್ ಫೈಲ್ಸ್ನಿಂದ ತೊಂದ್ರೆ ಇಲ್ಲ ಎಂದ ಕಿಶೋರ್!
ಬಾಲಿವುಡ್ನ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಪ್ರದರ್ಶನಕ್ಕಾಗಿ ‘ಜೇಮ್ಸ್’ ಚಿತ್ರವನ್ನು ಬಲವಂತವಾಗಿ ಎತ್ತಂಗಡಿ ಮಾಡಲಾಗುತ್ತಿದೆ ಎಂದು ‘ಜೇಮ್ಸ್’ ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಮೊದಲು ಹೇಳಿದ್ದರು. ದಿ ಕಾಶ್ಮೀರ ಫೈಲ್ ಸಿನಿಮಾದಿಂದ ಸಮಸ್ಯೆ ಆಗಿದೆ. ಒಂದು ಶೋ ಮಾತ್ರ ಬೇರೆ ಚಿತ್ರ ಹಾಕ್ತಿವಿ ಅಂತಾ ಕೇಳಿಕೊಂಡಿದ್ರು.. ನಾಲ್ಕು ಶೋ ನನಗೆ ಬೇಕೇ ಬೇಕು ಎಂದಿದ್ದೆ ಅಂತ ಹೇಳಿದ್ದರು. ಆದರೆ ಇಂದು ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಿಂದ ಜೇಮ್ಸ್ ಸಿನಿಮಾಕ್ಕೆ ಯಾವುದೇ ತೊಂದರೆಯಾಗಿಲ್ಲ ಎಂದಿದ್ದಾರೆ.
ಜೇಮ್ಸ್ 2ನೇ ವಾರ ಥಿಯೇಟರ್ ಸಂಖ್ಯೆ ಕಡಿಮೆ!
ವೀರೇಶ್ ಚಿತ್ರಮಂದಿರದ ಎರಡು ಸ್ಕ್ರೀನ್ ನಲ್ಲಿ ಒಂದು ಕಡೆ ಜೇಮ್ಸ, ಮತ್ತೊಂದು ಕಡೆ RRR ಪ್ರದರ್ಶನವಾಗಲಿದೆ. ಗೌಡನ ಪಾಳ್ಯದ ಶ್ರೀನಿವಾಸ ಚಿತ್ರಮಂದಿರದಲ್ಲಿ ಬೆಳಗಿನ ಶೋ RRR ಉಳಿದ ಶೋ ಜೇಮ್ಸ್ ಪ್ರದರ್ಶನವಾಗಲಿದೆ. ಜೆಪಿನಗರದ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಜೇಮ್ಸ್ , ಸಿದ್ಧಲಿಂಗೇಶ್ವರ ಚಿತ್ರಮಂದಿರದಲ್ಲಿ RRR ಅಬ್ಬರಿಸಲಿದೆ. ಒಟ್ಟಾರೆ ರಾಜ್ಯಾದ ಎಲ್ಲಾ ಕೇಂದ್ರಗಳಲ್ಲೂ ಜೇಮ್ಸ್ ಎರಡನೇ ವಾರಕ್ಕೂ ಪದರ್ಶನವಾಗ್ತಿದ್ದು, RRRಚಿತ್ರಕ್ಕೂ ಅನುವು ಮಾಡಿಕೊಟ್ಟಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada
Like this:
Like Loading...
Thu Mar 24 , 2022
ತಾರಾ ದಂಪತಿಗಳಲ್ಲೆ ಮುದ್ದಾದ ಜೋಡಿ ಎಂದು ಹೆಸರು ವಾಸಿಯಾಗಿದ್ದ ಸಮಂತಾ- ನಾಗಚೈತನ್ಯ ಕಳೆದ ವರ್ಷ ಡಿವೋರ್ಸ್ ಘೋಷಿಸಿದು ಅಭಿಮಾನಿಗಳಿಗೆ ಆಘಾತ ತಂದಿತ್ತು. ಪ್ರತ್ಯೇಕವಾದ ಬಳಿಕವೂ ಒಂದಲ್ಲೊಂದು ವೈಯಕ್ತಿಕ, ವೃತ್ತಿಸಂಬಂಧಿ ಕಾರಣಗಳಿಗೆ ಇಬ್ಬರು ಸುದ್ದಿಯಾಗುತ್ತಲೇ ಇದ್ದಾರೆ. ಇದೀಗ ಮಾಜಿ ದಂಪತಿ ಬೇರೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ.ಅದುವೆ ಸಮಂತಾ ಮಾಜಿ ಪತಿ ನಾಗ ಚೈತನ್ಯರನ್ನು ಇನ್ಸ್ಟಾಗ್ರಾಂನಲ್ಲಿ ಅನ್ಫಾಲೋ ಮಾಡಿದ್ದಾರೆ. ಅದಕ್ಕಿಂತ ಮುಂಚೆ ನಾಗಚೈತನ್ಯ ಅವರೊಂದಿಗಿದ್ದ ಎಲ್ಲಾ ಫೋಟೋಗಳನ್ನು ಸಹ ಇನ್ಸ್ಟಾಗ್ರಾಮ್ ನಿಂದ ಡಿಲೀಟ್ ಮಾಡಿದ್ದಾರೆ. […]